ಇತ್ತೀಚಿನ ಸುದ್ದಿರಾಜಕೀಯ

ಕುತೂಹಲ ಮೂಡಿಸಿದ್ದ ಸಿದ್ದು-ಸೋನಿಯಾ ಗಾಂಧಿ ಭೇಟಿ..!

ಬೆಂಗಳೂರು (ಅಕ್ಟೋಬರ್​ 06); ರಾಷ್ಟ್ರ ರಾಜಕಾರಣದಲ್ಲಿ (National Politics) ಹಲವಾರು ಆಗುಹೋಗುಗಳು ನಡೆಯುತ್ತಿದೆ. ಪಂಜಾಬ್ ಕಾಂಗ್ರೆಸ್​ ಬಿಕ್ಕಟ್ಟಿನಿಂದ ಉತ್ತರಪ್ರದೇಶದ ಲಖೀಂಪುರ್​ ಗಲಭೆಯ (Lakhimpur Violence)ವರೆಗೆ ಅನೇಕ ಪ್ರಮುಖ ವಿಚಾರಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿವೆ. ಅಲ್ಲದೆ, ಕಾಂಗ್ರೆಸ್​ ಪಕ್ಷದ ಒಳಗೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಜಿ-23 ಹೆಸರಿನಲ್ಲಿ ಹಿರಿಯ ನಾಯಕರ ಪ್ರತ್ಯೇಕ ಗುಂಪೊಂದು ಹುಟ್ಟಿಕೊಂಡಿದೆ.

ಈ ಗುಂಪು ರಾಜ್ಯದ ಮಾಜಿ ಸಿಎಂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ತಮ್ಮ ಬಣಕ್ಕೆ ಸೆಳೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಿದ್ದರಾಮಯ್ಯ (Siddaramaiah) ಮತ್ತು ಸೋನಿಯಾ ಗಾಂಧಿ ಅವರ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಅಲ್ಲದೆ, ಈ ಭೇಟಿಯಲ್ಲಿ ಇಬ್ಬರು ನಾಯಕರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.

ಇದೀಗ ಪ್ರಮುಖ ನಾಯಕರು ಚರ್ಚೆ ಮಾಡಿದ ವಿಚಾರಗಳ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಸ್ವತಃ ಸಿದ್ದರಾಮಯ್ಯನವರು ಚಿದಾನಂದ ಪಟೇಲ್​ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ!

Related Articles

Leave a Reply

Your email address will not be published. Required fields are marked *

Back to top button