ಕ್ರೀಡೆ
Trending

ಹಾರ್ದಿಕ್ ಪಾಂಡ್ಯ ವಿರುದ್ಧ ಕೋಪಗೊಂಡ ಆಕಾಶ್ ಅಂಬಾನಿ

IPL 2025: ಕ್ರಿಕೆಟ್​ ಅಂಗಳದ ಡೋಂಟ್ ಕೇರ್ ಆಟಗಾರ ಯಾರೆಂದು ಕೇಳಿದರೆ ಥಟ್ಟನೆ ಬರುವ ಉತ್ತರ ಹಾರ್ದಿಕ್ ಪಾಂಡ್ಯ (Hardik Pandya). ಯಾರು ಏನೇ ಹೇಳಲಿ, ಯಾವುದೇ ಯೋಜನೆ ಇರಲಿ. ಹಾರ್ದಿಕ್ ಪಾಂಡ್ಯ ಆಡುವುದು ತನ್ನಿಷ್ಟದಂತೆ. ಇಂತಹದೊಂದು ಅಟಿಟ್ಯೂಡ್​ ಮೂಲಕವೇ ಪಾಂಡ್ಯ ಹಲವು ಬಾರಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಪಾಂಡ್ಯರ ಇಂತಹ ನಿರ್ಧಾರಗಳೇ ತಂಡದ ಪಾಲಿಗೆ ಮುಳುವಾಯಿತು ಎಂದರೆ ತಪ್ಪಾಗಲಾರದು.ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 18 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು.

ಕೊನೆಯ 12 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್​ಗೆ 29 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಪಾಂಡ್ಯ 1 ರನ್ ಕಲೆಹಾಕಿದರು. ಇನ್ನು ಎರಡನೇ ಎಸೆತದಲ್ಲಿ ತಿಲಕ್ ವರ್ಮಾ 1 ರನ್ ಓಡಿದರು. ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಒಂದೊಂದು ರನ್ ಮೂಡಿಬಂತು. 5ನೇ ಎಸೆತದಲ್ಲಿ ತಿಲಕ್ ವರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ರಿಟೈರ್ಡ್​ ಹರ್ಟ್​ ಎಂದು ವಾಪಸ್ ಕಳುಹಿಸಿದರು.

ಬ್ಯಾಟಿಂಗ್ ಮಾಡಲು ಯಾವುದೇ ಸಮಸ್ಯೆ ಇಲ್ಲದಿದ್ದರೂ ತಿಲಕ್ ವರ್ಮಾ ಅವರನ್ನು ವಾಪಸ್ ಕಳಿಸಿರುವುದನ್ನು ನೋಡಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರಾದ ಆಕಾಶ್ ಅಂಬಾನಿ ಕೋಪಗೊಂಡರು. ಅಲ್ಲದೆ ಡಗೌಟ್ ಬಳಿ ಕೂತಿದ್ದ ಅವರ ಕೈ ಸನ್ನೆಗಳೊಂದಿಗೆ ಪಾಂಡ್ಯ ನಡೆಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ತಿಲಕ್ ವರ್ಮಾ ಅವರನ್ನು ಕಳುಹಿಸಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಕಣಕ್ಕಿಳಿಸಿದರೂ, ಹಾರ್ದಿಕ್ ಪಾಂಡ್ಯ ಅವರಿಗೂ ಸ್ಟ್ರೈಕ್ ನೀಡಲಿಲ್ಲ. ಕೊನೆಯ ಓವರ್​ನ ಮೂರನೇ ಎಸೆತದಲ್ಲಿ ರನ್ ಓಡುವ ಅವಕಾಶವಿದ್ದರೂ ಪಾಂಡ್ಯ ನಿರಾಕರಿಸಿದರು. ನಾಲ್ಕನೇ ಎಸೆತದಲ್ಲೂ ಯಾವುದೇ ರನ್ ಕಲೆಹಾಕಲಿಲ್ಲ.ಇನ್ನು ಐದನೇ ಎಸೆತದಲ್ಲಿ ಸಿಂಗಲ್ ತೆಗೆದರು. ಅಷ್ಟರಲ್ಲಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವು ಖಚಿತವಾಗಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 191 ರನ್​ಗಳಿಸಿ 12 ರನ್​ಗಳಿಂದ ಸೋಲೊಪ್ಪಿಕೊಂಡಿತು.ಅಂದರೆ ಈ ಪಂದ್ಯದ ಕೊನೆಯ ಓವರ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಡೆದ ಗುರಿ ಕೇವಲ 29 ರನ್​ಗಳು ಮಾತ್ರ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಅವರ ಡೋಂಟ್ ಕೇರ್ ನಡೆಯಿಂದಾಗಿ, ಮುಂಬೈ ಇಂಡಿಯನ್ಸ್ ತಂಡವು ಪಂದ್ಯವನ್ನು ಕೈಚೆಲ್ಲಿಕೊಳ್ಳಬೇಕಾಯಿತು.

Related Articles

Leave a Reply

Your email address will not be published. Required fields are marked *

Back to top button