ಇತ್ತೀಚಿನ ಸುದ್ದಿ

ಲಂಚ ಪಡೆಯುತ್ತಿದ್ದ ವೇಳೆ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ

ಇಂಡುವಳ್ಳಿ ಗ್ರಾಮದ ಮೊಹಮ್ಮದ್‌ ಗೌಸ್‌ ಅವರ ತಂದೆ ಭಾಷಾ ಸಾಬ್‌ ಅವರ ಹೆಸರಿನಲ್ಲಿ ಜಮೀನಿನ ಈ ಸ್ವತ್ತು ಮಾಡಿಕೊಡಲು ಪಿಡಿಒ ಈಶ್ವರಪ್ಪ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೊಹಮ್ಮದ್‌ ಗೌಸ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇವತ್ತು ಪಿಡಿಒ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಡಿಒ ಈ‍ಶ್ವರಪ್ಪನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಮಂಜುನಾಥ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇನ್ಸ್‌ಪೆಕ್ಟರ್‌ ಹೆಚ್‌.ಎಸ್.ಸುರೇಶ್‌, ಸಿಬ್ಬಂದಿ ಯೋಗೇಶ್‌, ಮಂಜುನಾಥ್‌, ಸುರೇಂದ್ರ, ಪ್ರಕಾಶ್‌ ಕುಮಾರ್‌, ಚೆನ್ನೇಶ್‌, ದೇವರಾಜ್‌, ಅರುಣ್‌ ಕುಮಾರ್‌, ಅಂಜಲಿ, ಜಯಂತ್‌, ಪ್ರದೀಪ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️

Related Articles

Leave a Reply

Your email address will not be published. Required fields are marked *

Back to top button