ರಾಜ್ಯಸುದ್ದಿ

ಅ.26ಕ್ಕೆ ಹಿಂಗಾರು ಪ್ರವೇಶ: ಇಂದು-ನಾಳೆ ರಾಜ್ಯದ ಈ ಭಾಗಗಳಲ್ಲಿ ಮಳೆ ಸಾಧ್ಯತೆ..!

Karnataka Rains Today: ರಾಜ್ಯದಲ್ಲಿ ಸದ್ಯ ಮುಂಗಾರು ಮಳೆ (Heavy rainfall) ಅಬ್ಬರಿಸುತ್ತಿದ್ದು ಇದೇ ತಿಂಗಳು 26ರ ನಂತರ ದೇಶಾದ್ಯಂತ ಮುಂಗಾರು (Monsoon) ತಗ್ಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮುಂಗಾರು ತಗ್ಗುವ ಬೆನ್ನಲ್ಲೇ ಹಿಂಗಾರು ಮಳೆ ಅ.26ರಿಂದ ಶುರುವಾಗಲಿದೆ.

ಈ ಬಾರಿ ಮುಂಗಾರು ಮಳೆ ಹಿಂದೆ ಸರಿಯುವಿಕೆ ತಡವಾಗಿದೆ. ಮುಂಗಾರು ಮಾರುತಗಳು ದೇಶದ ಹಲವು ಭಾಗಗಳಲ್ಲಿ ಸಕ್ರಿಯವಾಗಿವೆ. ಪ್ರಸ್ತುತ ಮುಂಗಾರು ಮಾರುತವು ಕೊಹಿಮ್​, ಸಿಲ್ಚಾರ್​, ಕೃಷ್ಣನಗರ, ಬರಿಪಾಡ, ಮಲ್ಕನ್​ಗಿರಿ, ನಲ್ಗೊಂಡ ಪ್ರದೇಶಗಳಿಂದ ಹಾದು ಹೋಗುತ್ತಿದೆ. ಇನ್ನು ಅರಬ್ಬಿ ಮತ್ತು ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರವಾಳಿ ಭಾಗದಲ್ಲಿ ಮಳೆ (Rainfall) ಯಾಗುವ ಸಾಧ್ಯತೆಗಳಿವೆ.

ಕರ್ನಾಟಕದಲ್ಲಿ ಎಲ್ಲೆಲ್ಲೆ ಮಳೆಯಾಗಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಇಂದುನಾಳೆಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button