ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಅಗತ್ಯವಿದೆ, ಅಂದು ನನ್ನನ್ನು ಸ್ವಲ್ಪ ಕೆಳಮಟ್ಟಕ್ಕೆ ಇಳಿಸಲಾಗಿತ್ತು

ಪ್ರಧಾನಿ ಮೋದಿ (NarendraModi) ಅವರು ನೆನ್ನೆ ಶುಕ್ರವಾರ (ಜೂ.6) ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದರ ನಂತರ ಪ್ರಧಾನಿ ಕತ್ರಾ-ಶ್ರೀನಗರ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದಾರೆ. ಈ ವೇಳೆ ಸಭಾ ಕಾರ್ಯಕ್ರಮವನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಸೇರಿದಂತೆ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕೂಡ ಭಾಗವಹಿಸಿದರು. ಈ ವೇಳ ಜಮ್ಮು -ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಹೇಳಿದರು. ಪ್ರಧಾನಿ ಮೋದಿಯ ಮುಂದೆ ಈ ಬೇಡಿಕೆಯನ್ನು ಸೂಕ್ಷ್ಮವಾಗಿ ಇಟ್ಟಿದ್ದಾರೆ. ಈ ವೇಳೆ 2014ರಲ್ಲಿ ತಮ್ಮ ಮೊದಲ ಸರ್ಕಾರದ ಕೊನೆಯ ಕಾರ್ಯಕ್ರಮವಾದ ಕತ್ರಾ ರೈಲು ನಿಲ್ದಾಣದ ಉದ್ಘಾಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಅಬ್ದುಲ್ಲಾ, ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಜನರು ಕೂಡ ವೇದಿಕೆಯಲ್ಲಿರುವುದು ಕಾಕತಾಳೀಯ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿಭಿನ್ನ ಹುದ್ದೆಯನ್ನು ಅಂದು ವಹಿಸಿಕೊಂಡಿದರು ಎಂದು ಹಾಸ್ಯವಾಗಿ ಒಮರ್ ಅಬ್ದುಲ್ಲಾ ಹೇಳಿದರು. ನೀವು ಅಂದು (ನರೇಂದ್ರ ಮೋದಿ) ಮೊದಲ ಬಾರಿಗೆ ಪ್ರಧಾನಿಯಾದಿರಿ ಹಾಗೂ ಚುನಾವಣೆಯ ನಂತರ ನೀವು ಇಲ್ಲಿಗೆ ಬಂದಿದ್ದೀರಿ ಮತ್ತು ಇದೀಗ ದೇವರ ದಯೆಯಿಂದ, ನೀವು ಇಲ್ಲಿ ಕತ್ರಾ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದೀರಿ. ಎರಡು ಬಾರಿ ದೇಶದ ಪ್ರಧಾನಿಯಾಗಿದ್ದೀರಾ. ಅಂದು ನಿಮ್ಮ ಜತೆಗೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಕೂಡ ಅವರು ಕೂಡ ಈ ವೇದಿಕೆಯಲ್ಲಿ ಇದ್ದರೆ. ಇನ್ನು ಅಂದು ರೈಲ್ವೆ ರಾಜ್ಯ ಸಚಿವರಾಗಿದ್ದ ನಮ್ಮ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಈ ಕಾರ್ಯಕ್ರಮದಲ್ಲಿ ಇದ್ದರೆ. ಇನ್ನು ನಾನು ಅಂದು ಪೂರ್ಣ ಪ್ರಮಾಣದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನನ್ನನ್ನು ಸ್ವಲ್ಪ ಕೆಳಮಟ್ಟಕ್ಕೆ ಇಳಿಸಲಾಗಿದೆ. ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಈಗ ನಾನು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಆದರೆ ಇದನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನಾನು ನಂಬುತ್ತೇನೆ. ಮತ್ತು ನಿಮ್ಮ ಸಹಾಯದಿಂದ, ಜಮ್ಮು ಮತ್ತು ಕಾಶ್ಮೀರ ಮತ್ತೆ ರಾಜ್ಯದ ಸ್ಥಾನಮಾನವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿ ಸೇರಿದ ಜನ ಕೂಡ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಆಗಸ್ಟ್ 2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಆಗಿ ಮರುಸಂಘಟಿಸಲಾಯಿತು.ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, 1980 ರ ದಶಕದ ಆರಂಭದಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಗಣನೀಯ ಸಮಯ ಕಳೆದಿರುವುದನ್ನು ನೆನಪಿಸಿಕೊಂಡರು.
ಈ ಯೋಜನೆ ಪ್ರಾರಂಭವಾದಾಗ ನಾನು ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಇಂದು ನನಗೆ 55 ವರ್ಷ. ನನ್ನ ಮಕ್ಕಳು ಕೂಡ ಕಾಲೇಜು ಮುಗಿಸಿದ್ದಾರೆ. ಈಗ ಈ ಯೋಜನೆ ಪೂರ್ಣಗೊಂಡಿದೆ” ಎಂದು ಅವರು ಕಾಶ್ಮೀರ ಕಣಿವೆ ಮತ್ತು ದೇಶದ ಉಳಿದ ಭಾಗಗಳ ನಡುವಿನ ರೈಲ್ವೆ ಸಂಪರ್ಕದ ದಶಕಗಳ ಪ್ರಯಾಣವನ್ನು ತೋರಿಸಿದರು.ರೈಲ್ವೆ ಸಂಪರ್ಕದ ಐತಿಹಾಸಿಕ ಮಹತ್ವವನ್ನು ಅವರು ಒತ್ತಿ ಹೇಳಿದರು, ಬ್ರಿಟಿಷರು ಸಹ ಕಾಶ್ಮೀರವನ್ನು ಉರಿ ಮತ್ತು ಝೀಲಂ ಮೂಲಕ ರೈಲು ಮೂಲಕ ಸಂಪರ್ಕಿಸುವ ಕನಸು ಕಂಡಿದ್ದರು, ಆದರೆ ಆ ಕನಸನ್ನು ನನಸಾಗಿಲ್ಲ. ಆದರೆ ಇಂದು, ಬ್ರಿಟಿಷರು ಪೂರೈಸಲು ಸಾಧ್ಯವಾಗದ್ದನ್ನು ನಿಮ್ಮ ಕೈಗಳಿಂದ ಪೂರೈಸಲಾಗಿದೆ. ಕಾಶ್ಮೀರ ಕಣಿವೆಯು ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದ್ದಾರೆ.
ಇನ್ನು ಈ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ ಅಬ್ದುಲ್ಲಾ, ಈ ಸಂದರ್ಭದಲ್ಲಿ ವಾಜಪೇಯಿ ಅವರಿಗೆ ಧನ್ಯವಾದ ಹೇಳದಿದ್ದರೆ ನಾನು ದೊಡ್ಡ ತಪ್ಪು ಮಾಡಿದಂತಾಗುತ್ತದೆ. ಅವರು ಇದಕ್ಕೆ ರಾಷ್ಟ್ರೀಯ ಮಹತ್ವದ ಯೋಜನೆಯ ಸ್ಥಾನಮಾನ ನೀಡಿ ಬಜೆಟ್ನ ಭಾಗವಾಗಿ ಮಾಡಿದ ನಂತರ ಯೋಜನೆ ಚಾಲನೆ ಪಡೆದಿದೆ. ರೈಲ್ವೆ ಯೋಜನೆಯು ಜಮ್ಮು ಮತ್ತು ಕಾಶ್ಮೀರಕ್ಕೆ ತರುವ ಅಪಾರ ಪ್ರಯೋಜನಗಳನ್ನು ಕೂಡ ಹೇಳಿದ್ದಾರೆ. ಈ ಯೋಜನೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ. ಪ್ರವಾಸೋದ್ಯಮದಿಂದ ಇದು ಪ್ರಯೋಜನ ಪಡೆಯಲಿದೆ. ಇದು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.