
ಕೋಲಾರ : ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ ಎಂದು ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.
ತಾಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಇದೇ ಏಪ್ರಿಲ್ ತಿಂಗಳ 30 ನೇ ತಾರೀಖಿ ನಿಂದ ಸುಮಾರು 5 ದಿನಗಳ ಕಾಲ ನಡೆಯುವ ಬಂಡಿ ದ್ಯಾವರ ಮಹೋತ್ಸವದ ಪ್ರಯುಕ್ತ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಗ್ರಾಮಸ್ಥರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ ಸುಮಾರು 40 ವರ್ಷಗಳ ನಂತರ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸುಮಾರು 20 ರಿಂದ 25 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಎಲ್ಲಾ ಸೌಕರ್ಯವನ್ನು ಒದಗಿಸುವ ಜವಾಬ್ದಾರಿ ಮುಖ್ಯವಾಗಿದೆ, ಜೊತೆಗೆ ಮಾಲೂರು ಶಾಸಕ ಕೆ.ವೈ ನಂಜೇಗೌಡರ ಕುಟುಂಬಕ್ಕೂ ಸಹ ಸಂಬಂಧಿತ ಕಾರ್ಯಕ್ರಮವಾಗಿರುತದೆ, ರಸ್ತೆಗಳನ್ನು ಸಹ ಮಾಡಿಸಲಾಗುತ್ತದೆ, ಹೆಚ್ಚಿನ ವಿದ್ಯುತ್ ವ್ಯವಸ್ಥೆ ಬೇಕಾಗಿರುವುದರಿಂದ ಬೆಸ್ಕಾಂ ಅಧಿಕಾರಿಗಳು ಈಗಿರುವ ಟ್ರಾನ್ಸ್ಫಾರ್ಮರ್ ಗಳ ಜೊತೆಗೆ ತಮ್ಮಲ್ಲಿ ಪರ್ಯಾಯ ವಾಗಿರುವ ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಬೇಕಾಗುತ್ತದೆ, ತೂಗುವ ತಂತಿಗಳನ್ನು ಮತ್ತು ಕಂಬಗಳ ವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ, ಗ್ರಾಮ ಪಂಚಾಯಿತಿಯ ವತಿಯಿಂದ ಯಾವ ಯಾವ ಕಡೆ ಕಂಬಗಳಲ್ಲಿ ವಿದ್ಯುತ್ ಬಲ್ಪುಗಳು ಇರುವುದಿಲ್ಲವೋ ಅಲ್ಲೆಲ್ಲಾ ಅಳವಡಿಸಬೇಕು, ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಕೋಲಾರ ನಗರಸಭೆ ವತಿಯಿಂದ ನೀರಿನ ಟ್ಯಾಂಕರ್ ಗಳ ವ್ಯವಸ್ಥೆಯು ಸಹ ಮಾಡಲಾಗುತ್ತದೆ ಗ್ರಾಮದಲ್ಲಿ ರಸ್ತೆಗಳ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು, ಪೋಲಿಸ್ ರವರು ಪಾರ್ಕಿಂಗ್ ಮತ್ತು ರಕ್ಷಣಾ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಮುಂದಿನ 2 ರಿಂದ 3 ದಿನಗಳ ನಂತರ ಮತ್ತೊಂದು ಸಭೆಯನ್ನು ನಡೆಸಿ ಆ ಸಭೆಯಲ್ಲಿ ಶಾಸಕರನ್ನು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮತ್ತು ಪಿ ಡಿ ಓ ಅಧಿಕಾರಿಗಳ, ಬೆಸ್ಕಾಂ ಮತ್ತು ಪಿಡಬ್ಲ್ಯೂಡಿ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಸೌಕರ್ಯಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ, ಮತ್ತು ತುರ್ತಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದರು.ಈ ಸಭೆಯಲ್ಲಿ ಸರ್ಕಾರಿ ಸೊಸೈಟಿ ಅಧ್ಯಕ್ಷ ಖಾಜಿ ಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡ ಹಳ್ಳಿ ಮುರಳಿ, ನರಸಾಪುರ ಕೆಪಿಎಸ್ ಶಾಲಾ ಅಭಿವೃದ್ಧಿ ಅಧ್ಯಕ್ಷ ಎಂ ಟಿ ಬಿ ಶ್ರೀನಿವಾಸ್, ಪಿಡಿಒ ಮುನಿರಾಜು, ಕುರ್ಕಿ ಗ್ರಾಮದ ದೇವರಾಜ್, ರಾಮಣ್ಣ, ಕೃಷ್ಣರೆಡ್ಡಿ, ಬಚ್ಚರೆಡ್ಡಿ, ಕೆ ಆರ್ ಪುರ ಕರವೇ ಅಧ್ಯಕ್ಷ, ಮಂಜು, ಬಾಬು, ನಾಗೇಶ್, ಚೌಡೇಗೌಡ, ಈರೇಗೌಡ, ಮೋಹನ್, ವಿನೋದ್, ಹಾಗೂ ಗ್ರಾಮಸ್ಥರು ಹಾಜರಿದ್ದರು.