ಇತ್ತೀಚಿನ ಸುದ್ದಿರಾಜ್ಯ
ಮಲೆನಾಡಿನಾದ್ಯಂತ ಸಂಭ್ರಮದ ಭೂಮಿ ಹುಣ್ಣಿಮೆ ಆಚರಣೆ | ಹರಾತಳುವಿನಲ್ಲಿ ತಮ್ಮ ಜಮೀನನಲ್ಲಿ ಪೂಜೆ ಸಲ್ಲಿಸಿದ ಮಾಜಿ ಶಾಸಕ ಹೆಚ್. ಹಾಲಪ್ಪ..

ಹೊಸನಗರ : ಮಲೆನಾಡಿನ ರೈತಪಿ ಸಮುದಾಯಕ್ಕೆ ಅತೀ ಮುಖ್ಯ ಹಬ್ಬ ಭೂಮಿ ಹುಣ್ಣಿಮೆ ಹಬ್ಬ.
ದಸರಾ ಕಳೆದು ವಾರದ ಒಳಗೆ ಬರುವ ಹಬ್ಬ
ಭೂಮಿ ತಾಯಿಗೆ ರೈತ ತಾನು ಬೆಳೆದ ಪಸಲಿಗೆ ಸೀಮಂತ ಕಾರ್ಯಕ್ರಮ.
ವಿಶೇಷವಾಗಿ ಭೂಟ್ಟಿಯಲ್ಲಿ ತಿನಿಸುಗಳನ್ನು ಹೊಲಗದ್ದೆ ಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುವುದು.
ಭೂಮಿ ಹುಣ್ಣಿಮೆ ದಾರ ಮನೆಯ ಸದ್ಯಸರು ಕಟ್ಟಿಕೊಂಡು ಹೊಲದಲ್ಲೇ ಊಟ ಮಾಡಿ ಮನೆಗೆ ಬರುವ ಸಂಪ್ರದಾಯ.