ರಾಜ್ಯ
Trending

ಸ್ವಾಭಿಮಾನದ ಬಸವಭಾವ ಎಲ್ಲರಲ್ಲಿ ಬರಲಿ-ಅಶೋಕ

ಕಲ್ಯಾಣದಲ್ಲಿ ಪ್ರಜಾಪ್ರಭುತ್ವದ ಬೀಜ ನೆಡಲಾಗಿತ್ತು ಜ್ಯಾತಿಯತೆಯನ್ನು ತೊಡೆದುಹಾಕಿ ಕಾಯಕ ಜೀವಿಗಳಿಗೆ ಅವರ ಸ್ಥಾನಗಳಿಗೆ ತೆರಳಿ ಜಗತ್ತಿನ ೨೫೦ ವಚನಕಾರರು ಹಾಗೂ ವಚನಗಾರ್ತಿಯರನ್ನು ಕರೆದುಕೊಂಡು ದೇಶದಲ್ಲಿ ಮೊಟ್ಟಮೊದಲನೆಯ ಸಂಸತ್ತನ್ನು ರಚನೆ ಮಾಡಿದ ಜಗಜ್ಯೋತಿ ಬಸವಣ್ಣನವರ ಕಾರ್ಯ ಸಾಮಾನ್ಯವಲ್ಲಾ ಅವರ ಕೀರ್ತಿ ಇಂದಿನ ಸಂಸತ್ತ ಭವನದಲ್ಲಿಯೂ ಬೆಳಗಿದೆ ಅಲ್ಲಿಯೂ ಕೂಡಾ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಶಿಕ್ಷಕರಾದ ಅಶೋಕ ಹಂಚಲಿ ಅವರು ನುಡಿದರು.

ಬುಧವಾರರಂದು ತಾಲೂಕಾಡಳಿತ ತಾಲೂಕಾ ಪಂಚಾಯತ್, ಪುರಸಭೆ, ಬಸವೇಶ್ವರ ಉತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ವೃತ್ತದ ಆವರಣದಲ್ಲಿ ಏರ್ಪಡಿಸಲಾದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆಯಲ್ಲಿ ಬಸವಣ್ಣನವರ ಪುಥ್ಥಳಿಯನ್ನು ಅಷ್ಟೇ ನಿಲ್ಲಿಸಲಾಗಿಲ್ಲಾ ಅದರೊಂದಿಗೆ ಬಸವಣ್ಣನವರ ಆದರ್ಶ ಗುಣಗಳನ್ನೂ ಸಹ ನಿಲ್ಲಿಸಲಾಗಿದೆ ಎಂದರು. ಬಧುಕಿನಲ್ಲಿ ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಬಸವ ಸಂಸ್ಕೃತಿ ಎಂಬುದು ಇನ್ನೂ ನಮ್ಮೇಲ್ಲರಲ್ಲಿ ಬಂದರೆ ಸುಂದರಮಯವಾದ ರಾಜ್ಯ ನಮ್ಮದಾಗಲಿದೆ ಎಂದರು. ಬಸವಣ್ಣನವರು ಈ ದೇಶದ ಸೃಷ್ಠಿ, ಸ್ವಾತಂತ್ರ್ಯ ವಿಚಾರವಾದಿ ಕಾಯಕಕ್ಕೆ ದೈವತ್ವವನ್ನು ತಂದುಕೊಟ್ಟವರಾಗಿದ್ದಾರೆಂಬುದನ್ನು ಕವಿಗಳು ವರ್ಣಿಸಿದ್ದಾರೆಂದು ವರ್ಣಿಸಿದ ಹಂಚಲಿ ಅವರು ಈ ಕುರಿತು ಅಲ್ಲಮಪ್ರಭುಗಳು ಯುಗ ಯುಗದ ಬಸವಣ್ಣ ಉತ್ಸಾಹಿ ಎಂದು ಬಣ್ಣಿಸಿದ್ದಾರೆಂದರು. ಸಿದ್ದಯ್ಯ ಪುರಾಣಿಕರು, ಜಿ.ಎಸ್.ರುದ್ರಪ್ಪನವರು ಬರೆದಂತಹ ಅನುಭಾವದ ಮಾತುಗಳನ್ನು ಹೇಳಿದರಲ್ಲದೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ದಾಂತ ಕುರಿತು ಸತ್ಯಕ್ಕ ಬರೆದ ವಚನಗಳ ಕುರಿತು ಮುಕ್ತ ಕಂಠದಿಂದ ಹೊಗಳಿದ ಹಂಚಲಿ ಅವರು ದೇಶದ ಈ ಹಿಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಹಾಗೂ ಇನ್ನಿತರ ರಾಜಕಾರಣಿಗಳ ಬಧುಕು ಹೇಗಿತ್ತೆಂಬುದನ್ನು ವಿವರಿಸಿದ ಅವರು ಬಸವಣ್ಣ ಕಿಂಕರನು ಆದ, ಶಂಕರನಾದ ಅವರಂತೆ ನಮ್ಮ ಬಧುಕಿನಲ್ಲಿ ಸ್ವಾಭಿಮಾನದ ಬಸವಭಾವ ಎಲ್ಲರಲ್ಲಿ ಬರಬೇಕೆಂದರು.

ಇನ್ನೋರ್ವ ಬಸವೇಶ್ವರ ವೃತ್ತದಲ್ಲಿ ಶಟಸ್ಥಲ ದ್ವಜಾರೋಹಣವನ್ನು ನೇರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಳಿಕೋಟೆ ತಾಲೂಕಾ ತಹಶಿಲ್ದಾರರಾದ ಡಾ.ವಿನಯಾ ಹೂಗಾರ ಅವರು ಮಾತನಾಡಿ ಸಮಾಜವೆಂಬುದು ರಾಮರಾಜ್ಯವಾಗಬೇಕಾದರೆ ಜಗಜ್ಯೋತಿ ಬಸವಣ್ಣನವರ ಬಸವತತ್ವ ಹಾಗೂ ಅವರ ಆದರ್ಶ ವಿಚಾರ ಹಾಗೂ ಅವರ ವಚನಗಳನ್ನು ಆಲಿಸಿ ಪಾಲಿಸಿದರೆ ಸಾದ್ಯವಾಗಲಿದೆ ಎಂದ ಅವರು ಬಸವ ಜಯಂತಿ ಅಂಗವಾಗಿ ಇಂದು ತಾಳಿಕೋಟೆ ಪಟ್ಟಣದಲ್ಲಿ ಭವ್ಯ ಮೇರವಣಿಗೆ ಏರ್ಪಡಿಸಿ ಕಂದಾಯ ಇಲಾಖೆಯೊಂದಿಗೆ ಕೈ ಜೋಡಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಮಸ್ತ ಜನತೆಗೆ ಅಭಿನಂದಿಸಿದರು.ಇದೇ ಸಮಯದಲ್ಲಿ ಅತಿಥಿ ಮಹೋದಯರಿಗೆ, ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ಪಟ್ಟಣದ ರಾಜವಾಡೆಯಿಂದ ಪ್ರಾರಂಭಗೊಂಡ ಬಸವೇಶ್ವರರ ಭಾವಚಿತ್ರದ ಮೇರವಣಿಗೆಯು ಕತ್ರಿ ಭಜಾರ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ ವೃತ್ತ, ಮಹಾರಾಣಾಪ್ರತಾಪ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿಯ ಬಸವೇಶ್ವರರ ಮಹಾ ಮೂರ್ತಿಗೆ ಮಹಾ ಪೂಜೆ ಗೈಯುವದರೊಂದಿಗೆ ಪುಷ್ಪಹಾರ ಹಾಕಿ ಗೌರವಿಸಲಾಯಿತಲ್ಲದೇ ನಂತರ ಮೆರವಣಿಗೆಯು ಸಭೆಯಾಗಿ ಮಾರ್ಪಟ್ಟಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಪುರಸಭಾ ಸದಸ್ಯರು, ಎಲ್ಲ ಸಮಾಜದ ಮುಖಂಡರುಗಳು, ಬಸವ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡು ಜಯಂತ್ಯೋತ್ಸವಕ್ಕೆ ಮೇರಗು ತಂದರು.ರಾಜು ವಿಜಾಪೂರ ಸ್ವಾಗತಿಸಿ ನಿರೂಪಿಸಿದರು. ಮಹಾಂತೇಶ ಮುರಾಳ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button