ರಾಜ್ಯ
Trending

ಸೈಡ್ ಪಿಕಪ್ ಹೆಸರಲ್ಲಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ

ದೇವನಹಳ್ಳಿ, ಏಪ್ರಿಲ್​ 07: ನಿನ್ನೆ ಹೇಳಿ ಕೇಳಿ ಶ್ರೀರಾಮ ನವಮಿ (Sri Rama Navami). ಹಿಂದೂಗಳ ಪವಿತ್ರ ಹಬ್ಬ ಸಹ ಹೌದು. ಹೀಗಾಗೆ ಚಾಲಕರೆಲ್ಲಾ ಒಂದೆರೆಡು ಬಾಡಿಗೆ ಜಾಸ್ತಿ ಸಿಗುತ್ತೆ ಅಂತ ಏರ್ಪೋಟ್​ಗೆ ಬಂದಿದ್ದು ಪಿಕಪ್ ಮಾಡುವ ಭರದಲ್ಲಿದ್ದರು. ಆದರೆ ಅಷ್ಟರಲ್ಲೇ ಟ್ಯಾಕ್ಸಿ ಸಂಸ್ಥೆಗಳು ಮತ್ತು ಚಾಲಕರ ನಡುವೆ ಪಿಕಪ್ ವಿಚಾರಕ್ಕೆ ಕಿರಿಕ್ ಉಂಟಾಗಿದ್ದು, 20ಕ್ಕೂ ಅಧಿಕ ಟ್ಯಾಕ್ಸಿ ಚಾಲಕರು (Taxi drivers) ದಿನಪೂರ್ತಿ ಪೊಲೀಸ್ ಠಾಣೆ ಮುಂದೆ ಪರದಾಡಿರುವಂತಹ ಘಟನೆ ನಡೆದಿದೆ.

ಅಲ್ಲದೆ ಅಡ್ಡ ಹಾಕಿದ ಟ್ಯಾಕ್ಸಿ ಚಾಲಕರ ಕೀ ಗಳನ್ನ ಕಿತ್ತುಕೊಂಡು ಬಳಿಕ ಆ ಕೀಗಳನ್ನ ಪೊಲೀಸರ ವಶಕ್ಕೆ ನೀಡಿದ್ದು, 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನ ಮೊನ್ನೆ ರಾತ್ರಿಯಿಂದ ನಿನ್ನೆ ಸಂಜೆವರೆಗೂ ಕೆಂಪೇಗೌಡ ಏರ್ಪೋಟ್ ನಲ್ಲೆ ಪೊಲೀಸರು ಸೀಜ್ ಮಾಡಿ ನಿಲ್ಲಿಸಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.ಅಲ್ಲದೆ ಅಡ್ಡ ಹಾಕಿದ ಟ್ಯಾಕ್ಸಿ ಚಾಲಕರ ಕೀ ಗಳನ್ನ ಕಿತ್ತುಕೊಂಡು ಬಳಿಕ ಆ ಕೀಗಳನ್ನ ಪೊಲೀಸರ ವಶಕ್ಕೆ ನೀಡಿದ್ದು, 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನ ಮೊನ್ನೆ ರಾತ್ರಿಯಿಂದ ನಿನ್ನೆ ಸಂಜೆವರೆಗೂ ಕೆಂಪೇಗೌಡ ಏರ್ಪೋಟ್ ನಲ್ಲೆ ಪೊಲೀಸರು ಸೀಜ್ ಮಾಡಿ ನಿಲ್ಲಿಸಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.ನಿನ್ನೆ ಸಂಜೆಯಿಂದ ನೀವು ಅಕ್ರಮವಾಗಿ ಸೈಡ್ ಪಿಕಪ್ ಮಾಡಲು ಬಂದಿದ್ದೀರಾ ಅಂತ ಚಾಲಕರಿಗೆ ದಂಡವನ್ನು ಹಾಕದೆ, ಟ್ಯಾಕ್ಸಿಯನ್ನು ಬಿಡದೆ ಪೊಲೀಸರು ಟ್ಯಾಕ್ಸಿಗಳನ್ನ ನಿಲ್ಲಿಸಿಕೊಂಡಿದ್ದು, ಹಬ್ಬಕ್ಕೆ ಒಂದೆರಡು ಕಾಸು ಮಾಡಿಕೊಳ್ಳೋಣ ಅಂತ ಬಂದ ನಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ಏರ್ಪೋಟ್​ನ ಕೆಎಸ್ಟಿಡಿಸಿ ಚಾಲಕರು ಸೇರಿದಂತೆ ಬಿಐಎಎಲ್​ ಸಿಬ್ಬಂದಿ ಮಾತು ಕೇಳಿಕೊಂಡು ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಅಂತ ಚಾಲಕರು ಒತ್ತಾಯಿಸಿದರು. ಇನ್ನೂ ಈ ಕುರಿತು ಟಿವಿ9 ನಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಕೆಂಪೇಗೌಡ ಏರ್ಪೋಟ್ ಠಾಣೆ ಪೊಲೀಸರು ನಿಲ್ಲಿಸಿದ್ದ 20ಕ್ಕೂ ಅಧಿಕ ಕ್ಯಾಬ್​​ಗಳನ್ನ ಬಿಟ್ಟು ಕಳಿಸಿದ್ದಾರೆ.

ಹಬ್ಬದಂದು ಒಂದೆರಡು ಟ್ರಿಪ್ ಹೆಚ್ಚು ಮಾಡಿಕೊಳ್ಳೋಣ ಅಂತ ಏರ್ಪೋಟ್​ಗೆ ಬಂದ ಟ್ಯಾಕ್ಸಿ ಚಾಲಕರಿಗೆ ಕೆಲ ಚಾಲಕರು ಮಾಡಿದ ಎಡವಟ್ಟಿನಿಂದ ದಿನಪೂರ್ತಿ ಪರದಾಡುವಂತಾಗಿತ್ತು. ಇನ್ನೂ ಇತ್ತೀಚೆಗೆ ಕೆಂಪೇಗೌಡ ಏರ್ಪೋಟ್​ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿಯು ಹೆಚ್ಚಾಗಿದ್ದು, ಏರ್ಪೋಟ್ ಸಿಬ್ಬಂದಿ ಮತ್ತು ಪೊಲೀಸರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button