
22ರಂದು ನಾಗಮಂಗಲ ಸಮೀಪ ಸೂಳೆಮಂಟಪದ ಪ್ರಕೃತಿ ಮಡಿಲಿನ ಕಾವ್ಯ ರಸದೌತಣ ನಾಗಮಂಗಲ ಜುಲೈ 18. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಾಹಿತ್ಯ ರಚನೆಕಾರರಿಗೆ ಪೂರಕವಾದ ರಾಜ್ಯಮಟ್ಟದ ಕವಿ ಸಮ್ಮೇಳನವನ್ನು ನಾಗಮಂಗಲದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಸಂಘದ ಹಿರಿಯ ಸದಸ್ಯರಾದ ನಾ.ಸು. ನಾಗೇಶ್ ರವರು ತಿಳಿಸಿದರು.ಅವರು ಇಂದು ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಾಗಮಂಗಲ ಕನ್ನಡ ಸಂಘ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಸಾಹಿತ್ಯ ರಚನೆಕಾರರು ಹಾಗೂ ಸಾಹಿತ್ಯ ಆಸಕ್ತರ ಕಾವ್ಯ ರಚನೆಗೆ ಪೂರಕವಾದ ಬೆಳವಣಿಗೆಗೆ ನಾಗಮಂಗಲದ ಗೆಳತಿ ಗುಡ್ಡ ಪರಿಸರ ಕೂಟ ಎಂಬ ಸಂಘಟನೆಯ ನಾಗಮಂಗಲದ ಕ್ರಿಯಾತ್ಮಕ ಸಂಘಟನೆಗಳಾದ ಕನ್ನಡ ಸಂಘ ಮತ್ತು ಚಾವಡಿ ಸಂಸ್ಥೆಗಳ ಸಹಾಯದಲ್ಲಿ ರಾಜ್ಯಮಟ್ಟದ ಕವಿ ಸಮ್ಮೇಳನವನ್ನು ಇದೇ ತಿಂಗಳು 22 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಏರ್ಪಡಿಸಲಾಗಿದೆ.ಕವಿಗೋಷ್ಠಿಯ ಮಾರ್ಗದರ್ಶಕರಾಗಿ ಪ್ರಸಿದ್ಧ ವಿದ್ವಾಂಸರಾದ ಶ್ರೀ ನರಹಳ್ಳಿ ಬಾಲಸುಬ್ರಮಣ್ಯ ಹಾಗೂ ಕವಿಯತ್ರಿ ಶ್ರೀಮತಿ ಪಿ ಚಂದ್ರಿಕಾ ರವರು ಭಾಗವಹಿಸಲಿದ್ದು ಕಾವ್ಯ ರಚನೆಯ ಬಗ್ಗೆ ತಿಳಿಸಿಕೊಡಲಿದ್ದಾರೆ.
ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳಿದ್ದು ಪೂರ್ವಭಾವಿಯಾಗಿ ಆಯ್ಕೆಯಾಗಿರುವ ರಾಜ್ಯದ ವಿವಿಧ ಭಾಗಗಳ 36 ಕವಿಗಳು ಈ ಘೋಷ್ಠಿಯಲ್ಲಿ ತಮ್ಮ ಕವಿತೆಯನ್ನು ವಾಚನ ಮಾಡಲಿದ್ದಾರೆ.ಕಾರ್ಯಕ್ರಮದ ಸ್ಥಳಕ್ಕೆ ಗೆಳತಿ ಗುಡ್ಡ ಕರೆದುಕೊಂಡು ಹೋಗಲು ನಾಗಮಂಗಲದ ವಿಧಾನಸೌಧದ ಸ್ಥಳದಿಂದ ಹೋಗಲು ವಾಹನದ ವ್ಯವಸ್ಥೆ ಮಾಡಲಾಗಿದ್ದು ನಾಡಿನ ಕಾವ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಕವಿ ಸಮ್ಮೇಳನಕ್ಕೆ ಆಸಕ್ತರು ನರಸಿಂಹ ಪ್ರಸಾದ್9980670 370 ಹಾಗೂ ರಮೇಶ್ ಗೌಡ9 980309060 ವಿವರಗಳಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸೂಚಿಸಲಾಗಿದೆ.ಇದೇ ಸಂದರ್ಭದಲ್ಲಿ ಕನ್ನಡ ಸಂಘದ ರಮೇಶ್ ಗೌಡ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.