
ಕುಣಿಗಲ್ : 11ನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅರಿವು ಮತ್ತು ಆಚಾರಗಳ ಮೂರ್ತ ರೂಪದಂತಿರುವ ,ದೇವರ ದಾಸಿಮಯ್ಯನವರ ,ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್ 2 ರಂದು ಆಚರಿಸುತ್ತಿರುವ ಪ್ರಯುಕ್ತ ಅವರನ್ನು ಸ್ಮರಿಸಿದ್ದಾರೆ ,ಎಂದು ಗ್ರೇಡ್ 2 ತಹಸೀಲ್ದಾರ್ ಯೋಗೀಶ್ ರವರು ಮಾತನಾಡಿ, ವಚನ ಸಾಹಿತ್ಯದ ಆದ್ಯ ಪ್ರವರ್ತಕ ಜೇಡರ ಅಥವಾ ದೇವರ ದಾಸಿಮಯ್ಯನವರು, ಬಸವೇಶ್ವರರಿಗಿಂತಲೂ 140 ವರ್ಷಗಳ ಪೂರ್ವದಲ್ಲಿ ಮಹಾಶಿವಶರಣರಾಗಿದ್ದವರು, ಬಸವಾದಿ ವಚನಕಾರರಿಗೆ ಇವರ ವಚನಗಳು ಸ್ಪೂರ್ತಿದಾಯಕ ಇಂದೇ ಪರಿಗಣಿಸಲಾಗಿದೆ ಎಂದು ಮಾತನಾಡಿದರು.
ಸ್ವಾಗತ ಭಾಷಣ : ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪುರಸಭಾ ಸದಸ್ಯರು ಉದಯ್ ಕುಮಾರ್ ಅವರು 11ನೇ ಶತಮಾನದ ಆದಿಕವಿ, ಪ್ರಥಮ ವಚನಕಾರ, ಬಸವಪೂರ್ವ ಯುಗದ ಶಿವಶರಣ, ಸಾಮಾಜಿಕ ನ್ಯಾಯದ ಆದಿ ಸಿದ್ದಾಂತಿ; ನೇಕಾರ ಪದ್ಮಶಾಲಿ ಸೆಕೆಂಡ್ ಎ ಕ್ಯಾಟಗರಿಯ ಉಳಿವಿಗಾಗಿ ಸದಾ ಶ್ರಮಿಸಿದ್ದರು, ಎಂದು ತಿಳಿಸಿದರು.
ಅರಿವು ಅರಿವು ಪುಸ್ತಕ ಲೇಖಕ ಬರಹಗಾರರಾದ ಟಿಬಿ ಕೃಷ್ಣರಾಜು ರವರು ಮಾತನಾಡಿ ದೇವರ ದಾಸಿಮಯ್ಯ ಕನ್ನಡದ ಆದ್ಯವಚನಕಾರ ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆ ವೃತ್ತಿಯ ಜೊತೆಗೆ ತನ್ನ ಕಾರ್ಯ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾ ಕಾರ್ಯಯೋಗಿ ಬಸವಣ್ಣನವರು ಸಹ ತಮ್ಮ ವಚನದಲ್ಲಿ ದಾಸಿಮಯ್ಯರವರನ್ನು ಸ್ಮರಿಸಿದ್ದಾರೆ, ಇವರ ಕುರಿತು ಬಸವ ಪುರಾಣ, ದೇವಾಂಗ ಪುರಾಣ, ಶಿವ ತತ್ವ ಚಿಂತಾಮಣಿ, ಮತ್ತು ಕಥಾಮಣಿ ,ಸೂತ್ರ ರತ್ನಾಕರ , ಅಂಧಕಾರದಿಂದ ಜ್ಞಾನದ ಕಡೆಗೆ ಅಂದಿನ ಶತಮಾನದಿಂದ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯನವರದ್ದಾಗಿದೆ, ಆದ್ದರಿಂದ ಅವರ ಜನ್ಮ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ,ರಾಜ್ಯ ಸರ್ಕಾರ ಇವರ ಜನ್ಮ ದಿನಾಂಕವನ್ನು ರಾಜ್ಯಾದ್ಯಂತ ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಶುಕ್ಲ ಪಂಚಮಿಯಂದು ಅಂದರೆ ಮಾರ್ಚ್ ,ಏಪ್ರಿಲ್ ತಿಂಗಳಲ್ಲಿ ಆಚರಿಸುತ್ತದೆ, ಮತ್ತು ಎಲ್ಲಾ ನೇಕಾರರು ಸಹ ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ , ದೇವರ ದಾಸಿಮಯ್ಯನವರನ್ನು ಜೇಡರದ ಅಸಿಮಯ್ಯ ದೇವಾಂಗದಾ ಸೀಮಯ್ಯ ಎಂಬ ಹೆಸರುಗಳಿಂದ ಗುರುತಿಸಲಾಗಿದ್ದರು, ಕೆಲ ವಿದ್ವಾಂಸರ ಪ್ರಕಾರ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರು ಬೇರೆ ಬೇರೆ ಎಂಬ ವಾದವಿದ್ದರೂ, ಇವರಿಬ್ಬರು ಬೇರೆ ಬೇರೆ ಎಂಬ ವಾದಕ್ಕೆ ಸಾಕಷ್ಟು ಪುರಾವೆಗಳಿಲ್ಲ ,ಆದ್ದರಿಂದ ಇವರಿಬ್ಬರೂ ಒಬ್ಬರೇ ಎನ್ನಬಹುದಾಗಿದೆ ಅವರ 176 ವಚನಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಯೋಗೀಶ್ ,ಅರಿವು ಪುಸ್ತಕ ವಿಶೇಷ ಲೇಖಕ ಬರಹಗಾರ ಟಿಬಿ ಕೃಷ್ಣರಾಜು, ಕೆ ಪಿ ಲೋಕೇಶ್ ಉಪಾಧ್ಯಕ್ಷರು ತೊಗಟವೀರ ಸಂಘ, ಉದಯಕುಮಾರ್ ಪುರಸಭಾ ಸದಸ್ಯರು ಕೋಟೆ, ಶಿವಶಂಕರ್ ಕೆ ಎಲ್, ರಮೇಶ್ ಸದಸ್ಯರು ತೊ ವಿ ಸಂಘ, ಚಂದ್ರಶೇಖರ್ ಕೆ ಜಿ ,ತೊ ವಿ ಸಂಘ ಕರವೇ ಕಾರ್ಯದರ್ಶಿ ಕುಣಿಗಲ್ ಹಾಗೂ ಉಪಸ್ಥಿತರಿದ್ದರು