ರಾಜ್ಯಸುದ್ದಿ

ಲಖೀಂಪುರ್​ ಹತ್ಯಾಕಾಂಡ; 10 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಬಿಜೆಪಿ ಸಚಿವ, ಮೃತ ರೈತ ಕುಟುಂಬಗಳ ಭೇಟಿಗೆ ನಿರಾಕರಣೆ..!

ಲಕ್ನೋ (ಅಕ್ಟೋಬರ್​ 14); ಉತ್ತರ ಪ್ರದೇಶದ ಲಖೀಂಪುರ್​ ಖೇರಿ ರೈತ ಹತ್ಯಾಕಾಂಡ (Lakhimpur Kheri Massacre) ನಡೆದ 10 ದಿನಗಳಾಗಿವೆ. ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Ashish Mishra) ಹಾರು ಹರಿಸಿದ್ದ ಕಾರಣ ಸ್ಥಳದಲ್ಲೇ 4 ಜನ ರೈತರು ಮೃತಪಟ್ಟಿದ್ದರು. ಅಲ್ಲದೆ, ಘಟನೆಯ ನಂತರ ನಡೆದ ಗಲಭೆಯಲ್ಲಿ ಪತ್ರಕರ್ತ ಸೇರಿದಂತೆ 4 ಜನ ಮೃತಪಟ್ಟಿದ್ದರು.

ಒಟ್ಟು 9 ಜನರ ಸಾವಿಗೆ ಕಾರಣವಾದ ಈ ಘಟನೆಯ ನೇರ ಆರೋಪಿ ಬಿಜೆಪಿ ಸಚಿವ ಅಜಯ್ ಮಿಶ್ರಾ ಮತ್ತು ಆತನ ಮಗ ಆಶೀಶ್ ಮಿಶ್ರಾ ಎನ್ನಲಾಗಿದೆ. ಈ ಘಟನೆ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಸ್ವತಃ ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶ ಮಾಡಿರುವ ಕಾರಣ ಆಶೀಶ್ ಮಿಶ್ರಾ ವಿರುದ್ಧ ಕೇಸ್​ ದಾಖಲಿಸಿ ಬಂದಿಸಲಾಗಿದೆ.

ಆದರೆ, ಘಟನೆ ನಡೆದು 10 ದಿನ ಕಳೆದರೂ ಸಹ ಯಾವೊಬ್ಬ ಬಿಜೆಪಿ (BJP) ನಾಯಕನೂ ಸಹ ಈ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿರಲಿಲ್ಲ. ಆದರೆ, ಬುಧವಾರ ಉತ್ತರಪ್ರದೇಶ ಸರ್ಕಾರದ ಕಾನೂನು ಸಚಿವ ಬ್ರಿಜೇಶ್ ಪಾಠಕ್ (Brijesh Pathak) ಮೊದಲ ಬಾರಿಗೆ ಲಖೀಂಪುರ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮೃತ ರೈತರ ಮನೆಗಳಿಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button