ರಾಜ್ಯ
Trending

ಮುಳಬಾಗಿಲು ತಾಲೂಕು ಪಂಚಾಯಿತಿ ಮುಂದೆ ಮುದಿಗೆರೆ ಪಂಚಾಯತಿ ಆಗಬೇಕೆಂದು ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ 10ನೇ ದಿನ ಹೋರಾಟ ಮುಂದುವರೆದಿದೆ

ಕೋಲಾರ:(ಮುಳಬಾಗಿಲು)ತಾಲೂಕಿನ ಮುದಿಗೆರೆ ಪಂಚಾಯಿತಿ ಗಡ್ಡೂರು ನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಪಂಚಾಯತಿರುವ ಹೆಸರಿಗೆ ಬರಬೇಕೆಂದು ಅನರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಹತ್ತನೇ ದಿನ ಮುಗಿದಿದ್ದು. ಇದುವರೆಗೂ ಕೋಲಾರ ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟಿದ್ದು. ನಿರಾಹರ ದಿಕ್ಷೆಯನ್ನು ಮುಂದೋಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ನಿರ್ಲಕ್ಷತೆಯಿಂದ ಮುದಿಗೆರೆ ಪಂಚಾಯಿತಿ ಯಾವುದೇ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. ಆದರಿಂದ ದಲಿತ ಪರ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಎಲ್ಲಾ ಒಂದಾಗಿ ಹಂತ ಹಂತವಾಗಿ ಹೋರಾಟವನ್ನು ಬಹಳ ಗಂಭೀರವಾಗಿ ಮಾಡಲು ಸಿದ್ದರಾಗಿದ್ದಾರೆ.ಬಹುಜನ ಚಳುವಳಿಯ ಸಂಸ್ಥಾಪಕ ಡಾಕ್ಟರ್ ಸಂಗ ಸಂದ್ರ ವಿಜಯ್ ಕುಮಾರ್ ಹೇಳಿದರು. ತದನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಸಂಯೋಜಕ ಜಿಲ್ಲಾ ಸಂಚಾಲಕರಾದ ಮೆಕಾನಿಕ್ ಶ್ರೀನಿವಾಸ್ ರವರು ಮುದಿಗೆರೆ ಪಂಚಾಯಿತಿ ಆಗಬೇಕೆಂದು ಇಲ್ಲ ಎಂದರೆ ಶಾಸಕರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು. ನಂತರ ಮಾತನಾಡಿದ ಕೀಲಹೊಳಲಿ ಸತೀಶ್ ರವರು ನಂತರ ಹೋರಾಟ ಹರಬೆತ್ಲೆ ಮೆರವಣಿಗೆ ಮಾಡಲು ನಾವು ಸಿದ್ದರಾಗಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದರು.ತದನಂತರ ಮಾತನಾಡಿದ ಬಾಲಕೃಷ್ಣಪ್ಪನವರು ಮುದಿಗೆರೆ ಪಂಚಾಯಿತಿ ಆಗದಿದ್ದ ಪಕ್ಷದಲ್ಲಿ ಕೂಡಲೇ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದು ಘಂಟಾಘೋಷವಾಗಿ ಹೇಳಿದರು. ಮುದಿಗೆರೆ ಗ್ರಾಮಸ್ಥರು ಎಲ್ಲರೂ ನಮ್ಮ ಪ್ರಾಣ ಹೋದರೂ ನಮ್ಮ ಪಂಚಾಯತಿ ನಮಗೆ ಬರೋತನಕ ನಾವು ಇಲ್ಲಿಂದ ಹೋಗುವುದಿಲ್ಲ ನಿರಹರ ದಿಕ್ಷೆ ಮಾಡುತ್ತೇವೆ ಎಂದು ಮುದಿಗೆರೆ ಗ್ರಾಮಸ್ಥರು ಆರ್ ಚಂದ್ರಪ್ಪ ಆರ್ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button