ಇತ್ತೀಚಿನ ಸುದ್ದಿ
Trending

ಮಹಾನ್ ನಾಯಕರ ಜಯಂತಿಯ ಪೂರ್ವಭಾವಿ ಸಭೆ.

ಆಲೂರು. ಹಸಿರು ಕ್ರಾಂತಿಯ ಹರಿಕಾರ,ಭಾರತದ ಮಾಜಿ ಉಪಪ್ರಧಾನಿ ಡಾ”ಬಾಬು ಜಗಜೀವನ ರಾಮ್ ಅವರ 118 ನೇ ಜನ್ಮದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ” ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಯನ್ನು ತಾಲ್ಲೂಕು ಕಚೇರಿಯಲ್ಲಿ ಆಲೂರು ಸಕಲೇಶಪುರ ಕ್ಷೇತ್ರ ದ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಮಾತನಾಡಿ ರಾಷ್ಟ್ರ ಕಂಡ ಪ್ರತಿಮ ನಾಯಕರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಎಲ್ಲಾ ದಲಿತಪರ ಸಂಘಟನೆಗಳು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರ ಸಹಕಾರದಿಂದ ಹಾಗೂ ತಾಲೂಕು ಆಡಳಿತ ಸಹಕಾರದಿಂದ ತುಂಬಾ ವಿಜೃಂಭಣೆಯಿಂದ ಮಾಡಲು ನಿರ್ಧರಿಸಿದ್ದೇವೆ. ಸರ್ವರ ಸಲಹೆ ಸಹಕಾರಗಳನ್ನು ತೆಗೆದುಕೊಂಡಿದ್ದೇವೆ ಅವರು ಯಾವ ರೀತಿ ಹೇಳಿದ್ದಾರೆ ಅದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಡುತ್ತೇವೆ ಈ ಭಾರಿ ಬೆಳ್ಳಿ ರಥವನ್ನು ಹಾಗೂ ಕಾಲಾತಂಡಗಳನ್ನು ಅಹ್ವಾನಿಸಿ ವಿಶೇಷವಾಗಿ ಜಯಂತಿಯನ್ನ ಆಚರಣೆ ಮಾಡೋಣ ಎಂದರು

ಈ ಪೂರ್ವಭಾವಿ ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ. ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಗಿರೀಶ್.ಸಮಾಜ ಕಾಲ್ಯಾಣಾಧಿಕಾರಿ ಲಿಂಗರಾಜು.ತಾಲ್ಲೂಕು ಆರೋಗ್ಯಧಿಕಾರಿ ನಿಸಾರ್ ಫಾತೀಮಾ.ಸಿಡಿಪಿಓ ಏ.ಟಿ ಮಲ್ಲೇಶ್.ಬಿಇಓ ಕೃಷ್ಣೇಗೌಡ. ಶಿರಸ್ತೇದಾರರಾದ ಅಂಕೇಗೌಡ.ಸಿಬ್ಬಂದಿಯಾದ ಸ್ಪೂರ್ತಿ ಹಾಗೂ ಎಲ್ಲಾ ಸಂಘ-ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button