ರಾಜಕೀಯರಾಜ್ಯ

ಬಿಜೆಪಿಯಿಂದ ಶಿಸ್ತುಕ್ರಮವಾದರೆ ಹೊಸ ಪಕ್ಷ ಕಟ್ತೀರಾ? ಯತ್ನಾಳ್ ಹೇಳಿದ್ದೇನು?

ಬೆಂಗಳೂರು : ಬಿಎಸ್ ವೈ ಕುಟುಂಬ ರಾಜಕಾರಣದ ಬಗ್ಗೆ, ವಿಜಯೇಂದ್ರ ನಾಯಕತ್ವದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ ಶಾಸಕ ಯತ್ನಾಳ್. ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶಿಸ್ತುಕ್ರಮವಾಗಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಶಿಸ್ತುಕ್ರಮ ಜರುಗಿಸಿದರೆ ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರಾ? ಬಿಜೆಪಿಯನ್ನು ತೊರೆಯುತ್ತಾರಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ಯತ್ನಾಳ್ ಉತ್ತರಿಸಿದ್ದಾರೆ.ಆ ರೀತಿ ಎಲ್ಲಾ ನಾವು ವಿಚಾರ ಮಾಡಿಲ್ಲ. ನಾವು ಬಿಜೆಪಿಯನ್ನೇ ಶಕ್ತಿಶಾಲಿ ಮಾಡುತ್ತೇವೆ. ಬಿಜೆಪಿಯನ್ನು ಹಾಳು ಮಾಡುವ ಕೆಲಸ ಮಾಡುವುದಿಲ್ಲ. ಬಿಜೆಪಿಯನ್ನು ನಮ್ಮ ಜಾತಿ ಹೆಸರಿನಿಂದ ಬ್ಲಾಕ್‌ಮೇಲ್ ಮಾಡುವವರು ಅಲ್ಲ. ಬಿಜೆಪಿಯನ್ನು ಕಟ್ಟಬೇಕು ನಾವು ಎಂದರು.ಒಬ್ಬ ವ್ಯಕ್ತಿಯ ಪರವಾಗಿ ನಾವು ಸಂಘರ್ಷ ಮಾಡುತ್ತಿಲ್ಲ. ಈ ಕುಟುಂಬದಿಂದ ಬಿಜೆಪಿ ಮುಕ್ತವಾಗಬೇಕು. ಇಲ್ಲ ಅಂತಾದ್ರೆ ಇವತ್ತು ಅವರ ಮಗ, ನಾಳೆ ಅವರ ಮೊಮ್ಮಗ, ನಾಳೆ ಅವರ ಮಗ ಹೀಗೆ ಮುಂದುವರೆಯುತ್ತದೆ. ಮೋದಿಯವರು ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ. ಅವರ ಮಾತನ್ನು ನಡೆಸಲು ನಾವು ಕುಟುಂಬ ರಾಜಕಾರಣದ ವಿರುದ್ಧ ಸಂಘರ್ಷ ನಡೆಸುತ್ತಿದ್ದೇವೆ. ನಾವು ಯಾವುದೇ ಪರಿಸ್ಥಿತಿಯಲ್ಲಿ ಮತ್ತೊಂದು ಪಕ್ಷ ಕಟ್ಟುವುದಾಗಲಿ, ಬಿಜೆಪಿ ಹೈಕಮಾಂಡ್‌ಗೆ ಬ್ಲಾಕ್‌ಮೇಲ್ ಮಾಡುವುದಾಗಲಿ ಮಾಡುವುದಿಲ್ಲ. ಅದು ನಮ್ಮ ಕಾರ್ಯ ಯೋಜನೆಯೂ ಅಲ್ಲ. 130 ಸ್ಥಾನಗಳನ್ನು ಮುಟ್ಟುವುದೇ ನಮ್ಮ ಗುರಿ ಎಂದರು.


Related Articles

Leave a Reply

Your email address will not be published. Required fields are marked *

Back to top button